ಕಾವೇರಿ ತಪ್ಪಲಿನ ನಕ್ಷೆಗಳನ್ನು ನೋಡಿ, ಅಲ್ಲಿ ನೀರು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ನಿಮಗೆ ಗೊತ್ತ? ಇದನ್ನು ನೋಡಿ ಸ್ವತಃ ನೀವೇ ನದಿಯ ಎರಡೂ ಬದಿಯಲ್ಲಿರುವ ಪಟ್ಟಣ ಹಾಗೂ ನಗರಗಳ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತೀರ!
 
ಮತ್ತಷ್ಟು...



ನೀರಿನಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುಲು, ಸೂಕ್ಷ್ಮಾಣುಗಳ ಉಂಟಾಗುವ ಪರಿಣಾಮಗಳನ್ನು ಪರಿಹರಿಸುವ ದೃಷ್ಟಿಯಿಂದ, ನೀರಿನ ಸುರಕ್ಷತೆಯನ್ನು ನಿರ್ಣಯಿಸಲು ಮಾಡುವ ಸರಳ ಪರೀಕ್ಷಣೆಗಳು ಅತ್ಯಗತ್ಯ.
ಮುಂದೆ ಓದಿ

ಪ್ರಶ್ನೋತ್ತರ

ಇಂಡಿಯ ವಾಟರ್ ಪೋರ್ಟಲ್ ನಲ್ಲಿ ನೀವೂ ಬರೆಯಬಹುದು! ಹೆಚ್ಚಿನ ಮಾಹಿತಿಗೆ ಸಂಪಾದಕರಿಗೊಂದು ಸಂದೇಶ ಕಳುಹಿಸಿ.

ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ನಿಟ್ಟೆ

ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.ಇಂಜಿನಿಯರಿಂಗ್ ಕಾಲೇಜಿನಲ್ಲೇ ಎರಡೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ.ಕಾಲೇಜಿನ ಹಾಸ್ಟೆಲೂ ಕಡಿಮೆಯೆಂದರೂ ಐನೂರು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಹೊಂದಿದೆ.ಅಲ್ಲದೆ ಕ್ಯಾಂಪಸ್ಸಿನಲ್ಲಿ ನಳನಳಿಸುವ ಹಸಿರುವನವಿದೆ.ಈ ದೊಡ್ಡ ಶಿಕ್ಷಣ ಸಮುಚ್ಚಯದ ನೀರಿನ ಅಗತ್ಯ ದಿನವೊಂದಕ್ಕೆ ಹೆಚ್ಚುಕಡಿಮೆ ಎರಡೂವರೆ ಲಕ್ಷ ಲೀಟರ್. ನೀರಿನ ಈ ಅಗತ್ಯಗಳನ್ನು ಪೂರೈಸಲು ಕೊಳವೆ ಬಾವಿಯನ್ನೆ ಅವಲಂಬಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಕ್ಯಾಂಪಸ್ಸಿನಲ್ಲಿ ನೀರಿನ ಕೊರತೆ ತಲೆದೋರಿತು. ಕಾರ್ಕಳದ ಹೊಳೆಯಿಂದ ನೀರನ್ನು ಟ್ಯಾಂಕರ್ ಮೂಲಕ ತರಿಸುವ ಪರಿಸ್ಥಿತಿ ಬಂದಾಗ ಕಾಲೇಜಿನ ಆಡಳಿತ ನೀರಿನ ಕೊರತೆ ಹೋಗಲಾಡಿಸಲು ಯೋಚಿಸಿದ್ದು ಸಹಜ.ಕೆಟ್ಟಿದ್ದ ಕೆಲವು ಕೊಳವೆ ಬಾವಿಗಳನ್ನು ನೀರಿಂಗಿಸಲು ಬಳಸಲಾಯಿತು. ಜತೆಗೆ ಟೆರೇಸಿನಲ್ಲಿ ಬಿದ್ದ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಯಿತು. ಈ ನೀರನ್ನು ಟ್ಯಾಂಕಿಗೆ ಸೇರಿಸಲು ಅವಕಾಶ ಒದಗಿಸುವ ರಚನೆಗಳನ್ನು ಮಾಡಲಾಯಿತು. ಎತ್ತರ ತಗ್ಗು ಇರುವ ಕ್ಯಾಂಪಸ್ಸಿನಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಲಾಗಿದೆ.ಇದರಿಂದ ನೀರು ಭೂಮಿಯೊಳಗೆ ಬಸಿಯುತ್ತದೆ. ಬೇಸಗೆಯಲ್ಲಿ ಬೀಳುವ ಮಳೆ ಅಥವ ಅಕಾಲದ ಮಳೆಯು ಬಹು ಮಟ್ಟಿಗೆ ಭೂಮಿಯಲ್ಲಿ ಇಂಗಲು ಈ ಗುಂಡಿಗಳು ನೆರವಾಗುತ್ತವೆ.ಕರಾವಳಿಯ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಯಥೇಚ್ಛ ಮಳೆ ಬೀಳುವುದರಿಂದ,ಮಳೆಗಾಲದಲ್ಲಿ ನೀರು ಹರಿದು ಹೋಗದೆ ವಿಧಿಯಿಲ್ಲವೆನ್ನಿ.  ಮುಂದೆ ಓದಿ »

ಗಂಗೆ ಅಂತರ್ಧಾನಳಾದಾಳೇ... !?


ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ,ಪ್ರೊ. ಜಿ ಡಿ ಅಗರ್ವಾಲ್

ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ?

--ಈ ವಿಪರ್ಯಾಸಗಳ ಸರಣಿಗೆ ಮತ್ತೊಂದು ಸೇರ್ಪಡೆ ಗಂಗೆ ಅಂತರ್ದಾನವಾದೊಡೆ...?!

--ಇದು ಯಾವುದೋ ಪುರಾಣದಲ್ಲಿನ ಪ್ರಸ್ತಾಪ ಅಲ್ಲ. ಗಂಗೆ ಪಾತ್ರ ಬಯಲಾದೀತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು, ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ಪರಿಸರ ಪ್ರಿಯರಲ್ಲಿ ಮಡುಗಟ್ಟಿದೆ.

ಇಂಥದೊಂದು ಆತಂಕವನ್ನು ಹೊರ ಹಾಕಿರುವ ಪ್ರೊ|ಜಿ.ಡಿ. ಅಗರ್ ವಾಲ್ ಸಾಮಾನ್ಯ ವ್ಯಕ್ತಿಯಲ್ಲ. ಇವರು ಖ್ಯಾತ ಪರಿಸರ ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಡೀನ್ ಆಗಿದ್ದವರು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿದ್ದವರು.

ಗಂಗೋತ್ರಿಯ ಹಿಮಗಡ್ಡೆಗಳು ಹಾಗೂ ಉತ್ತರಕಾಶಿ ನಡುವೆ ಆರು ಜಲ ವಿದ್ಯುತ್ ಯೋಜನೆಗಳಿಂದಾಗಿ ಸುಮಾರು 50 ಕಿಮೀಗಳಷ್ಟು ಉದ್ದ ಗಂಗಾ ನದಿ ಬತ್ತಿ ಹೋಗಬಹುದು ಎಂಬ ಆತಂಕ ಅವರದ್ದು. ಅವರಷ್ಟೇ ಅಲ್ಲ, ಅವರಂತೆಯೇ ಯೋಚಿಸುವ ಸಾವಿರಾರು ಜನರದ್ದು.

ಈ ಯೋಜನೆಗಳನ್ನು ಪ್ರತಿಭಟಿಸಿ ಅಗರ್ ವಾಲ್ ಅವರು ಇದೇ ಜೂನ್ 13ರಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಇದು ಹತ್ತನೇ ದಿನ. ಗಂಗೆಯ ಒಡಲಿಗೆ ನೀರು ತಂದು, ಹರಿವು ಹೆಚ್ಚಲು ಕಾರಣವಾಗುವ ಭಾಗೀರಥಿ ಹಾಗೂ ಭಿಲಂಗಣ ನದಿಗಳು ಈಗಾಗಲೇ ಒಣಗುತ್ತಿವೆ. ಗಂಗೆಯ ಹರಿವಿಗೆ ಅವುಗಳ ಕೊಡುಗೆ ನಗಣ್ಯವಾಗುತ್ತಿದೆ. ಮಾತ್ರವಲ್ಲ, ಗಂಗೆಯ ಒಡಲು ಸೇರುವ ಸಾವಿರಾರು ತೊರೆಗಳ ಒರತೆ ಬತ್ತುತ್ತಿದೆ.  ಮುಂದೆ ಓದಿ »

ಮತ್ತಷ್ಟು ವಿಶೇಷ ಬರಹಗಳು »

ವಾಟರ್ ಪೋರ್ಟಲ್ ಲಾಗಿನ್

ಈ ಪೋರ್ಟಲ್ ಗೆ ಭೇಟಿ ನೀಡಿದ ನಿಮಗೆ ಏನು ಅನಿಸಿತು? ಯಾವುದು ಇಷ್ಟವಾಯಿತು? ಯಾವುದು ಇಷ್ಟವಾಗಲಿಲ್ಲ? - ತಪ್ಪದೆ ನಮಗೆ ಬರೆದು ಕಳಿಸಿ!
ಅಲ್ಲದೆ ಈ ಪೋರ್ಟಲ್ ಗೆ ಏನೇನು ಸೇರಿಸಬಹುದು? ನಿಮಗೂ ಆಸಕ್ತಿ ಇದ್ದು ನೀವೂ ಬರೆಯುತ್ತೀರಾ? - ಹೌದಾದರೆ ಈ ಕೂಡಲೆ ನಮಗೆ ಬರೆದು ತಿಳಿಸಿ!
ನಿಮ್ಮ ಇ-ಮೇಯ್ಲ್ ಟೈಪಿಸಿ:

ಪ್ರಶ್ನೆ ಕೇಳಿ!
ನೀರಿನ ಸುತ್ತ ನಿಮಗಿರುವ ಪ್ರಶ್ನೆಗಳನ್ನು ಕೇಳಿ.


ಜಲ ಸಂಪನ್ಮೂಲದ ಯೋಜನೆ ಹಾಗೂ ಸಂಶೋಧನೆಗೆ ಹವಮಾನಿಕ ಮಾಹಿತಿ ಅತ್ಯಗತ್ಯ. ಭಾರತದಲ್ಲಿ, ಜನಸಾಮಾನ್ಯನಿಗೆ ಈ ಮಾಹಿತಿ ದೊರಕುವುದು ಬಹಳ ಕಷ್ಟ. ಈ ಸಾಧನದಲ್ಲಿ, ಭಾರತದ ಯಾವುದೇ ಭಾಗದ 1901ರಿಂದ 2002ವರೆಗಿನ ಹವಾಮಾನಿಕ ಸೂಚ್ಯಾಂಕಗಳ ಒಟ್ಟಾರೆ ಮಾಹಿತಿ ಜೋಡಣೆಗಳನ್ನು ಸರಳ ರೂಪದಲ್ಲಿ ಬಳಕೆದಾರರಿಗೆ ದೊರಕಿಸಿಕೊಡಲಾಗುತ್ತದೆ. ಮುಂದೆ ಓದಿ



ಜನವರಿ 12, 2007ರಂದು, ಭಾರತ ಜಲ ಪೋರ್ಟಲ್ ನ ಉದ್ಫಾಟನೆಯನ್ನು ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ರವರು ನವದೆಹಲಿಯ ತಮ್ಮ ನಿವಾಸದಲ್ಲಿ ನೆರವೇರಿಸಿದರು.



ಮಳೆನೀರು ಸಂಗ್ರಹಣೆಯ ತಾಂತ್ರಿಕ ಕೈಪಿಡಿ. ಮಳೆಯ ಪೀಪಾಯಿಗಳು, ಪುನರುಜ್ಜೀವನ ಹೊಂಡಗಳು (recharge pits), ಸಂಪುಗಳಲ್ಲಿ (sump) ಮಳೆನೀರನ್ನು ಕಳಿಸುವುದು, ಮಳೆನೀರಿನ ಶೋಧಕಗಳು (filters), ಪುನರುಜ್ಜೀವನ ಬಾವಿಗಳು, ಇವುಗಳ ವಿಷಯವನ್ನು ಚರ್ಚಿಸುತ್ತದೆ.
ಮುಂದೆ ಓದಿ

Syndicate

Syndicate content