ಏಪ್ರಿಲ್ 30ರಂದು ಶಾರದ ಪ್ರಸಾದ್ ರವರು ಕೊಚ್ಚಿನ್ ನಿಂದ ಹೊರಟ ದಿನದ ಬಗ್ಗೆ ಬರೆದಿದ್ದಾರೆ. ಅದರ ತುಣುಕುಗಳನ್ನು ಇಲ್ಲಿ ನೋಡಿ:
ಏಪ್ರಿಲ್ 30ರಂದು ನಾವು ಕೊಚ್ಚಿನ್ ನಿಂದ ಹೊರೆಟೆವು. 30 ನಿಮಿಷಗಳಲ್ಲಿ NH-17 ಅನ್ನು (ರಾಷ್ಟ್ರೀಯ ಹೆದ್ದಾರಿ - 17) ತಲುಪಿದೆವು. NH-17 ಬಹಳ ಕಿರಿದಾದ ಹೆದ್ದಾರಿಯಾಗಿದ್ದು, ಅದರ ಇಕ್ಕೆಲೆಗಳಲ್ಲಿ ಹಲವಾರು ಪಟ್ಟಣಗಳು ಹಾಗೂ ನಗರಗಳನ್ನು ಕಾಣಬಹುದು. ಕೇರಳ ರಾಜ್ಯ ತಲಪುವ ವೇಳೆಗೆ, ಅದು ಜನರು ಹಾಗೂ ಬಸ್ಸುಗಳಿಂದ ಕಿಕ್ಕಿರಿದು ತುಂಬಿರುತ್ತದೆ. ಕ್ರಮಿಸುವ ದೂರ ಬಹಳಷ್ಟಲ್ಲದಿದ್ದರೂ, ಸುಮಾರು 40 ಕಿಲೋಮೀಟರ್ ನಷ್ಟು ದೂರ ಹೋದೆವು. ಕರ್ನಾಟಕದ
ಭಾಗದಲ್ಲಿ ಹೆದ್ದಾರಿಯು ಸ್ವಲ್ಪ ಅಗಲವಾಗಿದೆ, ಜನಸಂದಣಿಯೂ ಕಡಿಮೆ. ಗೋವೆಯ ಭಾಗದಲ್ಲಿ
ನಿಸರ್ಗ ಸೌಂದರ್ಯ ಕೇರಳ ರಾಜ್ಯದಲ್ಲಿ ಇರುವಷ್ಟೇ ಚೆನ್ನಾಗಿದೆ - ಅದು ಘಾಟಿಯ ದಾರಿ. ಮಹಾರಾಷ್ಟ್ರ ವಿಭಾಗವು ಅಷ್ಟು ಹಚ್ಚಹಸಿರಿನಿಂದ ತುಂಬಿರದಿದ್ದರೂ, ಕಣ್ಣಿಗೆ ತಂಪು ನೀಡುತ್ತದೆ. ರಾಷ್ಟ್ರೀಯ ಹೆದ್ದಾರಿ - 17ರ 65% ಭಾಗವು ಫಾಟಿಯಿಂದ ಕೂಡಿರುವಂತಹುದು. ಘಾಟಿಯಲ್ಲಿ ಪಯಣಿಸುವಾಗ ಸಹಜವಾಗಿಯೇ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಈ ಹಾದಿಯಲ್ಲಿ ಮಾರ್ಗಗಳನ್ನು ಯೋಜಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು.
ಈ ಹೆದ್ದಾರಿಯಲ್ಲಿ ನಾವು ಸುಮಾರು 1,200 ಕಿಲೋಮೀಟರ್ ದೂರ ಹಾಗೂ ಮೂರು ದಿನಗಳನ್ನು ಕಳೆದೆವು. ಕೊನೆಗೂ ರಾಷ್ಟ್ರೀಯ ಹೆದ್ದಾರಿ 17ಕ್ಕೆ ವಿದಾಯ ಹೇಳಿ, ಮಹಾಬಲೇಶ್ವರದ ಮೂಲಕ ಹಾದು ಹೋಗುತ್ತ ರಾ.ಹೆ.4ಕ್ಕೆ ಬಂದು ಸೇರಿದೆವು.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/k2k/2008/05/
- 638 reads
Poll
Recent comments
- Very gud pic..
4 hours 18 min ago - exess water from krishna
1 day 23 hours ago - bahala cennagide _ ee bhaavi
1 week 4 hours ago - hai ee photo tumba
1 week 1 day ago - ಶ್ಯಾಮ್
1 week 4 days ago - ಬೃಹತ್
1 week 5 days ago - idu "ನಮ್ಮ
1 week 5 days ago - ವಸಂತ್,
ಈ
1 week 6 days ago - Sooper!
2 weeks 5 hours ago - ಹೌದು ನಾನು
2 weeks 6 hours ago
Recent blog posts
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್
- ನಾಗರೀಕರಿಗಿಲ್ಲ ಕಾಳಜಿ
- ಮಳೆನೀರು ಸಂಗ್ರಹ ನಿರ್ವಹಣೆ ಪ್ರಾತ್ಯಕ್ಷಿಕೆ

ಹೊಸ ಕಾಮೆಂಟ್ ಸೇರಿಸಿ